ನನ್ನ ಅನುಪಸ್ಥಿತಿ ಕಾಡದಂತೆ ರಾಹುಲ್ ನಿಮ್ಮೊಂದಿಗೆ ಇರಲಿದ್ದಾರೆ: ಬಿಜೆಪಿ ಪರಾಜಿತ ಅಭ್ಯರ್ಥಿ

Share
0Shares

FASTNEWS

JUNE 6, 2024

ರಾಯ್ ಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿ ವಾರಾಂತ್ಯದಲ್ಲಿ ರಾಯ್ ಬರೇಲಿ ಜನರೊಂದಿಗೆ ಇರಲಿದ್ದಾರೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ


ಚುನಾವಣಾ ಫಲಿತಾಂಶದ ಕುರಿತು ಮಾತನಾಡಿರುವ ದಿನೇಶ್, ‘2019ರಿಂದ 2024ರ ವರೆಗೆ ನಾನು ಅವಿರತವಾಗಿ ನಿಮ್ಮ ಸೇವೆ ಮಾಡಿದ್ದೇನೆ. ಈ ಅವಧಿಯಲ್ಲಿ ನನ್ನ ಕುಟುಂಬದ ಜವಾಬ್ದಾರಿಗಳು ಹಿಂದೆ ಬಿದ್ದಿವೆ. ನನ್ನ ಮಗ, ಮಗಳು ಮದುವೆಗೆ ಬಂದಿದ್ದಾರೆ. ಆ ಜವಾಬ್ದಾರಿಗಳನ್ನೂ ನಿಭಾಯಿಸಬೇಕಿದೆ. ಸರ್ಕಾರ ಮತ್ತು ಪಕ್ಷದ ಸೇವೆ ಬಳಿಕ ಶನಿವಾರ ಮತ್ತು ಭಾನುವಾರ ಮಾತ್ರ ನಮಗೆ ರಜೆ ಸಿಗುತ್ತದೆ. ಆದ್ದರಿಂದ, ನನ್ನ ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವುದಕ್ಕಾಗಿ ನಾನು ಒಂದು ವರ್ಷದ ಅವಧಿಗೆ ಶನಿವಾರ ಮತ್ತು ಭಾನುವಾರದಂದು ಮಾತ್ರ ಭಾಗಶಃ ರಜೆ ಕೇಳುತ್ತಿದ್ದೇನೆ. ಉಳಿದ ದಿನಗಳಲ್ಲಿ ಎಂದಿನಂತೆ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮ ಸುಖ–ದುಃಖದಲ್ಲಿ ಭಾಗಿಯಾಗುತ್ತೇನೆ’ ಎಂದು ಹೇಳಿದ್ದಾರೆ.


ದಿನೇಶ್ ಅವರು ರಾಹುಲ್ ಎದುರು ಬರೋಬ್ಬರಿ 3,90,030 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ರಾಹುಲ್ 6,87,649 ಮತಗಳನ್ನು ಪಡೆದಿದ್ದರೆ, ದಿನೇಶ್ 2,97,619 ಮತಗಳನ್ನು ಗಿಟ್ಟಿಸಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282