ಗಂಗಾವತಿಗೆ ಪೂರ್ಣ ಪ್ರಮಾಣದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರು…!

Share
0Shares

ಕೊಪ್ಪಳ ಜಿಲ್ಲಾ ವಕೀಲರ ಸಂಘದ ವಿರೋಧಕ್ಕೆ ಗಂಗಾವತಿ ವಕೀಲರ ಖಂಡನೆ:

ಗಂಗಾವತಿ: ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕಕ್ಷಿಧಾರಿಗೆ ಅನುಕೂಲವಾಗಲೆಂದು ಹೈ ಕೋರ್ಟಿನ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಗಂಗಾವತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಶೇಷ ಪ್ರಕರಣಗಳೊಂದಿಗೆ ಪೂರ್ತಿ ಪ್ರಮಾಣದ ಜಿಲ್ಲಾ ನ್ಯಾಯಾಲಯ ವಾಗಿ ಘೋಷಿಸಿದ್ದನ್ನು ಕೊಪ್ಪಳ ಜಿಲ್ಲಾ ವಕೀಲರ ಸಂಘ ಇದಕ್ಕೆ ವಿರೋಧಿಸಿ ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದ್ದನ್ನು ಗಂಗಾವತಿ ವಕೀಲರ ಸಂಘ ಮತ್ತು ವಕೀಲರು ಖಂಡಿಸಿದ್ದಾರೆ.
ಜಿಲ್ಲಾ ವಕೀಲರ ಸಂಘ ವಿರೋಧಿಸಿ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆ ಶನಿವಾರ ಗಂಗಾವತಿ ವಕೀಲರ ಸಂಘದಲ್ಲಿ ಸಂಘದ ನೇತ್ರತ್ವದಲ್ಲಿ ವಕೀಲರೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು.ಕೊಪ್ಪಳ ಜಿಲ್ಲಾ ವಕೀಲರ ಸಂಘವು ಪ್ರತಿ ಹಂತದಲ್ಲೂ ಗಂಗಾವತಿ ವಕೀಲರ ಸಂಘಕ್ಕೆ ಆಸಹಕಾರ ಮಾಡುತ್ತಿದ್ದು, ಇದೇ ರೀತಿ ಅಸಹಕಾರ ಮುಂದುವರಿಸಿದರೆ ಮುಂದೆ ಒಂದು ದಿನ ಬೇರೆ ಜಿಲ್ಲಾ ಜೊತೆ ಸೇರುವ ಅಥವಾ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡಬೇಕಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಕೊಪ್ಪಳ ವಕೀಲರ ಸಂಘದಿಂದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರೆ ಅಂತವರಿಗೆ ಗಂಗಾವತಿ ವಕೀಲರ ಸಂಘದಿಂದ ಬೆಂಬಲ ಸೂಚಿಸುವುದಿಲ್ಲ, ಕೊಪ್ಪಳ ಜಿಲ್ಲಾ ವಕೀಲರ ಸಂಘ ಹೆಸರನ್ನು ಬಳಸಿಕೊಂಡು ಅಖಂಡ ಗಂಗಾವತಿ ವಕೀಲರ ಸಂಘಕ್ಕೆ ಅನ್ಯಾಯ ಮಾಡುತ್ತಿದ್ದು, ಇದನ್ನು ಸಹ ಸಂಘವು ತೀವ್ರವಾಗಿ ಖಂಡಿಸಲಾಯಿತು.
ಅಣ್ಣ-ತಮ್ಮಂದಿರಂತೆ ಇದ್ದ ನಾವೆಲ್ಲ ಈ ರೀತಿ ಪ್ರತಿಭಟನೆ ಮಾಡಿ ಮುಜ ಗರಕ್ಕೆ ಈಡು ಮಾಡಿ ಕೊಟ್ಟಿರುವ ಕೊಪ್ಪಳ ವಕೀಲರ ಸಂಘದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ, ಸದ್ರಿ ವಿಷಯವನ್ನು ಇಲ್ಲಿಗೆ ಬಿಡದೆ ಮುಂದುವರೆಸಿಕೊಂಡ ಹೋದಲ್ಲಿ ಗಂಗಾವತಿ ವಕೀಲರ ಸಂಘ ಯಾವುದೇರೀತಿಯ ಹೋರಾಟಕ್ಕೂ ಸಿದ್ದರಾಗಿರುತ್ತವೆ ಎಂದು ನಿರ್ಣಯಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಪರಸಪ್ಪ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಹಿರಿಯ ವಕೀಲರಾದ ಹೆಚ್. ಬಸನಗೌಡ, ಎಚ್.ಪ್ರಭಾಕರ್, ಎಸ್. ಎಸ್. ಪಟ್ಟಣಶೆಟ್ಟಿ, ಎಂ.ಪಂಪನಗೌಡ, ಡಿ.ಎ. ಹಾಲಸಮುದ್ರ, ನಾಗನಗೌಡ ಪಾಟೀಲ್, ಶರದ್ ದಂಡಿನ್, ಕೆ.ಕೃಷ್ಣಪ್ಪ, ಕೆ.ಅನಂತರಾವ್, ಮಹೇಶ್ ಕುಲಕರ್ಣಿ, ಶರಣಗೌಡ ಮಾಲಿ ಪಾಟೀಲ್, ಪ್ರಕಾಶ್ ಕುಸುಬಿ, ನಜಿರ್ ಹುಸೇನ್, ತ್ರಿಲೋಚನ್, ಶಿವಪ್ಪ ಯಲ್ಬುರ್ಗಿ, ನಾಗರಾಜ್ ಬೂದಿ, ಮಹೇಶ್ ತಳ್ತಾ‌ರ್, ಅರುಣ್, ಸಲೀಂ ಪಾಷಾ, ಅಕ್ಕಮಹಾದೇವಿ, ಸೌಭಾಗ್ಯ ಲಕ್ಷ್ಮಿ, ರಾಜೇಶ್ವರಿ, ರೋಜಾ, ಶರಣಮ್ಮ ಸೇರಿದಂತೆ ಅನೇಕ ಹಿರಿಯ-ಕಿರಿಯ ವಕೀಲರು ಸಭೆಯಲ್ಲಿ ಭಾಗವಹಿಸಿದ್ದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282