ಖಮೇನಿ ದುಬೈ: ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್ ಗಳನ್ನು ಹೊರಡಿಸುವ ಬದಲು ಮರಣದಂಡನೆ ವಿಧಿಸಬೇಕು ಎಂದು ಇರಾನ್ ನ ಸರ್ವೋಚ್ಛ ನಾಯಕ ಆಯತ್ ಉಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಈಚೆಗೆ ಬಂಧನದ ವಾರಂಟ್ ಜಾರಿಗೊಳಿಸಿತ್ತು. ಈ ಕುರಿತು ಖಮೇನಿ ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್ ಗಳನ್ನು ಹೊರಡಿಸುವ ಬದಲು ಮರಣದಂಡನೆ ವಿಧಿಸಬೇಕು ಎಂದು ಹೇಳಿದ್ದಾರೆ. ಐಸಿಸಿಯ ಈ ಕ್ರಮವು ನೆತನ್ಯಾಹು ಅವರ ಸಂಚಾರಕ್ಕೆ ನಿರ್ಬಂಧ ವಿಧಿಸುತ್ತದೆ. ನ್ಯಾಯಾಲಯದ 124 ಸದಸ್ಯ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಬಹುದಾಗಿದೆ. ಮಾನವೀಯತೆಯ ವಿರುದ್ಧದ ಅಪರಾಧ ಮತ್ತು 2023ರ ಅಕ್ಟೋಬರ್ 8ರಿಂದ ಅವರು ನಡೆಸಿರುವ ಯುದ್ಧಾಪರಾಧಗಳಿಗಾಗಿ ನೆತನ್ಯಾಹು ಮತ್ತು ಗ್ಯಾಲಂಟ್ ಅವರನ್ನು ಬಂಧಿಸಲು ವಾರಂಟ್ ಜಾರಿಗೊಳಿಸಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿತ್ತು.
Share