ಯತ್ನಾಳ್ ಎಂಬ ದೀಪ ಆದಷ್ಟು ಬೇಗ ಆರುತ್ತೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಕಿಡಿ

Share
0Shares

ಬೆಂಗಳೂರು: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ದೀಪ ಆದಷ್ಟು ಬೇಗ ಆರುತ್ತೆ’ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬೀಗ ಹಾಕಿ ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ. ಬಿಜೆಪಿ ಬೈದರೆ ಕಾರ್ಯಕರ್ತರು ಸುಮ್ಮನಿರಲ್ಲ. ದೀಪ ಆರುವ ಮುಂಚೆ ಪ್ರಕಾಶಮಾನವಾಗಿ ಉರಿಯುತ್ತೆ. ಆದಷ್ಟು ಬೇಗ ಆರುತ್ತೆ’ ಎಂದರು. ಯಾರ ಅನುಮತಿಯನ್ನು ಪಡೆದುಕೊಂಡು ಯತ್ನಾಳ್ ವಕ್ಫ್ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ? ಈಗಾಗಲೇ ರಾಜ್ಯಾಧ್ಯಕ್ಷರು ಮೂರು ತಂಡ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ವಕ್ಫ್ ವಿರೋಧಿ ಅಭಿಯಾನ ನಡೆಸುತ್ತಿದ್ದಾರೆ. ಪಕ್ಷ ಇಲ್ಲದೆ ಚಿಹ್ನೆ ಹಿಡಿದುಕೊಂಡು ಹೋಗ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡುವುದಕ್ಕಿಂತ ಹೆಚ್ಚಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮೆಚ್ಚುಗೆ ಪಡೆಯಲು ವಿಜಯೇಂದ್ರ ವಿರುದ್ಧ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282