ಸುದೀಪ್ ಎದುರು ನಡೆಯಲಿಲ್ಲ ಶೋಭಾ ಡ್ರಾಮಾ: ಗೆಟ್​ ಔಟ್​ ಎಂದ ಕಿಚ್ಚ

Share
0Shares

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬರುವಾಗ ಶೋಭಾ ಶೆಟ್ಟಿ ಅವರು ಸಖತ್ ಸೌಂಡ್ ಮಾಡಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಗಟ್ಟಿಯಾಗಿ ನಿಂತುಕೊಳ್ಳಲು ಶೋಭಾ ಶೆಟ್ಟಿಗೆ ಸಾಧ್ಯವಾಗಿಲ್ಲ. ಆದರೆ ಅದು ಇಲ್ಲಿ ಸಮಸ್ಯೆಯೇ ಅಲ್ಲ. ಭಾನುವಾರದ ಶೋಭಾ ಶೆಟ್ಟಿ ಅವರಿಗೆ ಪ್ರೇಕ್ಷಕರಿಂದ ಹೆಚ್ಚಿನ ವೋಟ್​ ಬಂದಿದ್ದರಿಂದ ಅವರು ಸೇಫ್​ ಆದರು. ಆ ವಿಚಾರವನ್ನು ಸುದೀಪ್ ಮೊದಲು ಘೋಷಿಸಿದಾಗ, ‘ಜನರು ನನ್ನನ್ನು ವೋಟ್​ ಮಾಡಿ ಉಳಿಸಿದ್ದಾರೆ. ಏನು ಮಾತನಾಡಬೇಕು ಅಂತ ತಿಳಿಯುತ್ತಿಲ್ಲ. ಅನಾರೋಗ್ಯದ ಕಾರಣದಿಂದ ನನಗೆ ಆಟ ಆಡೋಕೆ ಆಗಲ್ಲ ಎನಿಸುತ್ತಿದೆ’ ಶೋಭಾ ಹೇಳಿದರು. ಆಗ ಅವರಿಗೆ ಸುದೀಪ್ ಬುದ್ಧಿಮಾತು ಹೇಳಿದರು. ‘ತಾಯಿ ನಿಧನರಾದಾಗಲೂ ನಾನು ನನ್ನ ಕರ್ತವ್ಯ ಮಾಡಿದ್ದೆ’ ಎಂದು ಹೇಳುವ ಮೂಲಕ ಸುದೀಪ್ ಅವರು ಶೋಭಾಗೆ ಸ್ಫೂರ್ತಿ ತುಂಬಿದರು. ಸುದೀಪ್ ಮಾತಿನಿಂದ ಶೋಭಾಗೆ ಧೈರ್ಯ ಬಂತು. ‘ಕ್ಷಮಿಸಿ ಸರ್. ನಾನೇ ಪ್ರೇಕ್ಷಕರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ನನ್ನ ಆಟ ನಾನು ತೋರಿಸುತ್ತೇನೆ. ಕಮ್​ಬ್ಯಾಕ್ ಮಾಡುತ್ತೇನೆ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳುತ್ತೇನೆ. ಸುದೀಪ್ ಸರ್ ಮೌಲ್ಯಯುತ ಮಾತುಗಳಿಗೆ ಥ್ಯಾಂಕ್ಸ್’ ಎಂದು ಭಾಷಣ ಬಿಗಿದರು. ಆದರೆ ಸಂಚಿಕೆ ಮುಗಿಯುವ ವೇಳೆಗೆ ಶೋಭಾ ಶೆಟ್ಟಿ ಅವರು ಹೊಸ ಡ್ರಾಮಾ ಶುರು ಮಾಡಿದರು. ಕೊನೆಯಲ್ಲಿ ಶಿಶಿರ್ ಮತ್ತು ಐಶ್ವರ್ಯಾ ಅವರು ಡೇಂಜರ್​ ಜೋನ್​ನಲ್ಲಿ ಇದ್ದರು. ಅವರಿಬ್ಬರ ಪೈಕಿ ಯಾರು ಹೊರಗೆ ಹೋಗುತ್ತಾರೆ ಎಂದು ಕೇಳಿದಾಗ ಶೋಭಾ ಕಣ್ಣೀರಿನ ಡ್ರಾಮಾ ಆರಂಭಿಸಿದರು. ‘ನನಗೆ ಇಲ್ಲಿ ಇರಲು ಆಗುತ್ತಿಲ್ಲ’ ಎಂದು ಅತ್ತರು. ಅದರಿಂದ ಸುದೀಪ್ ಅವರಿಗೆ ವಿಪರೀತ ಕೋಪ ಬಂತು. ನನ್ನ ಮಾತಿಗೆ ಮತ್ತು ಜನರಿಗೆ ಬೆಲೆ ಕೊಡದೇ ಇರುವವರ ಬಗ್ಗೆ ನನಗೆ ಸಿಂಪಥಿ ಬೇಡ. ಇದೆಲ್ಲ ದೊಡ್ಡ ಡ್ರಾಮಾ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಥರ ಯಾವತ್ತೂ ನಡದೇ ಇಲ್ಲ. ಜನರ ವೋಟ್​ಗೆ ನೀವು ಬೆಲೆ ಕೊಡಲಿಲ್ಲ. ನನ್ನನ್ನೇನು ಮೂರ್ಖ ಅಂದುಕೊಂಡಿದ್ದೀರಾ? ಚಲೋ.. ನಾನು ನಿಮ್ಮನ್ನು ಮನೆಗೆ ಕಳಿಸುತ್ತೇನೆ. ವೋಟ್ ಹಾಕಿದವರಿಗೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಸುದೀಪ್ ಅವರು ಅಂತಿಮ ತೀರ್ಮಾನ ನೀಡಿದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282