ಬೆಂಗಳೂರು: ನಮ್ಮ ಸರ್ಕಾರದ ಮೇಲೆ 60% ಕಮೀಷನ್ ಆರೋಪ ಮಾಡುವ ಕುಮಾರಸ್ವಾಮಿ ದಾಖಲೆ ಕೊಟ್ಟಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರದ ಮೇಲೆ 60% ಕಮೀಷನ್ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೇಲೆ ಆರೋಪ ಮಾಡುವ ಕುಮಾರಸ್ವಾಮಿ ಏನು ದಾಖಲಾತಿ ಕೊಟ್ಟಿದ್ದಾರೆ? ಅವರು ದಾಖಲಾತಿ ಕೊಟ್ಟು ಆರೋಪ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಮೇಲೆ 40% ಆರೋಪ ಮಾಡಿದ್ದು ಗುತ್ತಿಗೆದಾರ ಸಂಘದವರು, ನಾವಲ್ಲ. ಮೊದಲು ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಆಮೇಲೆ ನಾವು ಹೇಳಿದ್ದು. ಹಿಂದಿನ ಸರ್ಕಾರದವರು ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ನಕ್ಸಲರು ಶರಣಾಗತಿಯಾಗಲೂ ನಾನೇ ಕರೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನಕ್ಸಲರು ಶರಣಾಗಬೇಕು ಎಂದು ನಾನೇ ಕರೆ ಕೊಟ್ಡಿದ್ದೆ. ಮುಖ್ಯವಾಹಿನಿಗೆ ಬರುವಂತೆ ನಾನೇ ಕರೆ ಕೊಟ್ಟಿದ್ದೆ. ಅವರು ಶರಣಾಗೋ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರ ಮನಸ್ಸು ಪರಿವರ್ತನೆ ಆಗಬಹುದು ಎಂದು ಅಂದುಕೊಂಡಿದ್ದೇನೆ. ಈ ಮೂಲಕ ನಕ್ಸಲರು ಶರಣಾಗತಿಯನ್ನ ಪರೋಕ್ಷವಾಗಿ ಅವರು ಸ್ವಾಗತಿಸಿದ್ದಾರೆ.
Share