ಲಾಲು ಪುತ್ರನ ಸೂಚನೆಯಂತೆ ನೃತ್ಯ: ಶಾಸಕರ ಭದ್ರತಾ ಕೆಲಸದಿಂದ ಕಾನ್‌ ಸ್ಟೇಬಲ್ ತೆರವು

Share
0Shares

ಸಮಸ್ತಿಪುರ: ಮಾಜಿ ಸಚಿವ ಹಾಗೂ ಆರ್‌ ಜೆಡಿ ಪಕ್ಷದ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ ಸ್ಟೇಬಲ್‌, ಹೋಳಿ ಸಂಭ್ರಮಾಚರಣೆ ವೇಳೆ ಸಮವಸ್ತ್ರದಲ್ಲಿದ್ದಾಗೇ ನೃತ್ಯ ಮಾಡಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ತೇಜ್‌ ಪ್ರತಾಪ್‌ ಅವರ ಸೂಚನೆಯಂತೆ ನೃತ್ಯ ಮಾಡಿದ್ದ ಸಿಬ್ಬಂದಿಯನ್ನು, ಶಾಸಕರ ಭದ್ರತಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.

ಈ ಸಂಬಂಧ ಎಸ್‌ಎಸ್‌ಪಿ ಕಚೇರಿ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್‌ ದೀಪಕ್‌ ಕುಮಾರ್‌ ಅವರು, ಸಮವಸ್ತ್ರದಲ್ಲಿದ್ದಾಗಲೇ ನೃತ್ಯ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಪೊಲೀಸ್‌ ಕರ್ತವ್ಯಕ್ಕೆ ವಾಪಸ್‌ ಕಳುಹಿಸಲಾಗಿದೆ. ತೇಜ್‌ ಪ್ರತಾಪ್‌ ಅವರ ಭದ್ರತೆಗೆ ಮತ್ತೊಬ್ಬ ಕಾನ್‌ಸ್ಟೆಬಲ್‌ ಅನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282